ಯಕ್ಷ ಪ್ರಶ್ನೆ ?

ಮನದ ಬಾಗಿಲ ಬಳಿ ಬಂದ
ಭಾವಗಳು, ಬಂದ ದಾರಿಗೆ
ಸುಂಕವಿಲ್ಲವೆಂಬಂತೆ ಮರಳಿದವೇಕೆ ?

ನಾಲಿಗೆಯ ತುದಿಗೆ.. ಬಂದ ಎಷ್ಟೋ
ಮಾತುಗಳು, ಮತ್ತೊಂದಿಷ್ಟು
ಧೈರ್ಯ ಮಾಡಲಿಲ್ಲವೇಕೆ ?

ಗರಿಗೆದರಿ, ಒಳಗೊಳಗೆ ಘರ್ಜಿಸಿದ
ಆಸೆಗಳು, ಕುಯ್ ಗುಡುತ್ತ, ಬಾಲ ಮುದುರಿ
ಮೂಲೆ ಸೇರಿದ್ದೇಕೆ ?

ನಾನೆಂಬ ಶತೃವೇ ?
ನನ್ನದೇ ಎಂಬ ಹುಚ್ಚು ಭರವಸೆಯೇ ?
ನನ್ನದಾಗುವುದಿಲ್ಲವೆಂಬ ವಿರಕ್ತಿಯೇ ?
ಪ್ರಶ್ನೆಗಳು, ಪ್ರಶ್ನಿಸಿದಷ್ಟೂ
ಉತ್ತರಿಸಲಾರದಷ್ಟು…. ಜಟಿಲವಾಗುತ್ತಿವೆಯೇಕೆ ??

___________________________________________________________

ನವೆಂಬರ್, ೨೦೦೭

Comments

Popular posts from this blog

ಸ್ವಾಭಿಮಾನ

ಗಡಿಯಾರ-ಜೀವನಯಾನ

ಬವಣೆ