Posts

Showing posts from 2017

ಗಡಿಯಾರ-ಜೀವನಯಾನ

Image
ಗಡಿಯಾರ-ಜೀವನಯಾನ --------- ಬಿಡುವಿರದೆ, ಎಡೆಬಿಡದೆ ಉರುಳುತಿಹೆ ಎಂದೆಂದೂ ಎಲ್ಲಿಗೆಂದು ಕೇಳ್ವೊಡೆ, ತಿಳಿದಿಲ್ಲ ಹಿಂದು-ಮುಂದು! ದಾಟಿ ದಾಟಿ ಅಂಕೆಗಳ ಮೈಲಿಗಲ್ಲು, ಗಮ್ಯ ತಲುಪಿದೆನೆಂದು ಹಿಗ್ಗಿತು ನಿಮಿಷದ ಮುಳ್ಳು! ಇಂತಾವೆ ಸುತ್ತು, ಸಾವಿರವೇ ಆತು, ಮುಗಿಯದ ಪಯಣವಿದೆಂದು ಗೊಳ್ಳೆಂದಿತು ಕ್ಷಣದ ಮುಳ್ಳು. ಸರಿ ಸಾಕಿನ್ನು ಗುರಿ ತಲುಪುವ ಭ್ರಮೆ. ಸವಿಯುವೆನು ಸಂಚಾರದಲಿರುವ ನಲುಮೆ. ನಿಂತು ನಿಂತು ಬೆಳೆಸಿದೆ ಸಂಕೆಮಿತ್ರರ ಒಡನಾಟ. ಬದುಕಿನಲಿ ಇನ್ನಿಲ್ಲ ಏಕತಾನತೆ ಕಾಟ. ಕೇಳು ನೀ ಮನುಜ, ಬದುಕೊಂದು ತೆವಳುವ ಗಡಿಯಾರ. ಗುರಿಯಿರದ ಕಡೆಗೆಲ್ಲೋ ಮುಗಿಯದ ಸಂಚಾರ. ಜೀವನಯಾನದಲಿ ತುಂಬಿರಲಿ ಸಹಚರರು ಪ್ರೀತಿ ಹಂಚುತ ಸಾಗು, ಕಡೆಯ ನಿಲ್ದಾಣ ಬರುವುದೆಂದೋ ಬಲ್ಲವರು ಯಾರು? ==== ಚುಟುಕು -------- ಜಗವೆಲ್ಲಾ ಒಂದು ಗಡಿಯಾರದಂಗಡಿ ಜನರೆಲ್ಲಾ ಇದ್ದಂತೆ ಒಂದೊಂದು ಘಡಿ ಮಿಡಿವ ಹೃದಯವೇ ನಿಮಿಷದ ಮುಳ್ಳು. ಬಡಿತ ನಿಂತರೆ ಬದಲಾಯಿಸಲು ಇಲ್ಲ ಯಾವುದೇ ಸೆಲ್ಲು!! ಸೆಲ್ಲು=battery ========  ಗಡಿಯಾರದಳಲು. (ಅಪೂರ್ಣ.. ) ------- ಜಗವೆಲ್ಲಾ ಮಲಗಿದರೂ ನನಗಿಲ್ಲ ಬಿಡುವು ಹಗಲಿರಲಿ ಇರುಳಿರಲಿ ನಾನೀಜೋ, ನದಿಗಿಲ್ಲ ದಡವು!! ಕಣ್ಣಿಗೆಣ್ಣೆಯ ಹಾಕಿ ತಿರುಗುವೆ ನಾ ಗಸ್ತು. ಸೌಜನ್ಯಕ್ಕಾದರೂ ಕೇಳಬಾರದೆ ನಿನಗಾಯಿತಾ ಸುಸ್ತು? ನಸುಕಿನಲಿ ನಾ ಕೂಗಿ ಕರೆದೊಡೆ ಆಣತಿಯಂತೆ. ತಲೆಗೊಂದು ಬಡಿದು ಮಗ್ಗುಲು ಬದಲಿಸುವರು ನಾ ಯಾರೋ, ತಿಳಿದೇ ಇಲ್ಲದಂತೆ!

ವೇಷ

Image
ಹೊಸದೇನನ್ನೋ ಬರೆಯಬೇಕೆಂಬ  ತುಡಿತದಿಂದ ಬರೆದಿದ್ದು ಈ ಸಾಲುಗಳು. ಯಾವುದೇ ಭಕ್ತಿ-ಭಾವಗಳಿಗೆ ಧಕ್ಕೆ ಗೊಳಿಸುವ ಉದ್ದೇಶ ಖಂಡಿತ ಇಲ್ಲ ------- ಗಂಗಾಧರನಿಗೆತ್ತೆನೋ ಭೀತಿ ಜಟೆಯ ತೆರೆದೆಡೆ, ಓಡಿಬಿಡುವಳೆಂದು ಕಿರಿಪತ್ನಿ ಚಂದ್ರಶೇಖರನಿಗಿ -ದ್ದಿರಬಹುದು ಆತಂಕ ಶಶಿಯ  ಕೆಳಗಿಳಿಸಿದರೆ, ಕೊಡುವರಾರೆಂದು ಧರೆಗೆ, ಇರುಳ ಬೆಳಕ! ಹೀಗೆ ಏನಿತ್ತೋ ಆತನಿಗೆ ಸಾಸಿರ ಬಿಕ್ಕಟ್ಟು. ಅದೇ ಚಿಂತೆಯಲಿ ಗಮನ ಕೊಡದೆ  ಜಡ್ಡುಗಟ್ಟಿತೊ ಜುಟ್ಟು. ಅವನ ವೇಷ ಅವಗೆ ಬಿಟ್ಟು  ತಿಳಿವುದೊಳಿತೇನೋ ಶಿವನಾಂತರ್ಯದ ಗುಟ್ಟು  ವೇಷದ ಅನುಕರಣೆಯಿಂದೊಂದೇ ಆಗದು ಶಿವಸಾಕ್ಷಾತ್ಕಾರ. ಕೃತಿಯಲ್ಲಿ , ಕರ್ಮದಲಿ ಇರಲಿ ನಿಷ್ಠೆ, ಎಲ್ಲೆಲ್ಲೂ  ಇರುವನವನೇ  ನಿರಾಕಾರ

ನೀಲಕಂಠನ ರಂಗಿನ ರಹಸ್ಯ

Image
ನೀಲಗಗನದ ಮೇಲೆ ತೇಲುತಿಹ ಖಗವೇ. ಬೇಗ ಹೇಳೇಲೆ ನೀ ರ೦ಗು ಪಡೆದ ಬಗೆಯೇ? ನೀಲಸಾಗರದಲಿ ಮುಳುಗಿ ಎದ್ದ ಜಲವೇ? ನೀಲ ಗಿರಿಗಳ ಮೇಲೆ ಹಾದು ಹೋದ ಫಲವೇ? ನೀಲಾಕಾಶದೊಡನಿ ರುವ ನಿನ್ನೊಡನಾಟದ ಗುರುತೇ? ನೀಲ ಮೇಘ ಶ್ಯಾಮ ಮೈದಡವಿ ತೋರಿದನೆ ಮಮತೆ? ಸಾಕು ನಿಲಿಸುವೆ ಇನ್ನು ನಿನ್ನ ಬಣ್ಣದೊಡವೆಯ ಹಿ೦ದಿರುವ ಒಗಟ ಬಿಡಿಸುವ ಗೊಡವೆ ಸೊಬಗ ಸವಿವುದ ಬಿಟ್ಟು ಮೂಲ ಹುಡುಕಿ ನಾ ಏನ ಪಡೆವೆ!? ಎ೦ಬ ಸತ್ಯವು ಅರಿವಾದುದು ಸ್ವಲ್ಪ ಆಯಿತು ತಡವೆ! ---------------------------- ಆಗಸ್ಟ್ ೨, ೨೦೧೭ Attachments area

ನಗೆಮುಗುಳು

Image
ಅ೦ದೇ ಅರಳಿ ಅ೦ದೇ ಬಾಡುವ ಒಂದೇ ದಿನದ,  ಕ್ಷಣಿಕ ಈ ಬಾಳು. ಆದರೂ  ನಕ್ಕು, ನಳನಳಿಸುತಿವೆ ನೋಡಿ ಹೂಗಳು. ನಗುವೊoದೇ ಅ೦ತೆ ಔಷಧ  ಎಲ್ಲಾ ನೋವ ಮರೆಯಲು. ಇದನರಿತ೦ತಿದೆ ಹೂವೊಡತಿ ಆಹಾ.. ಅದೆಷ್ಟು ಹೊಳಪು ಆ ಕ೦ಗಳು.. ಆ ನಗೆ ಮುಗುಳು!! ---------- ಜುಲೈ ೨೦೧೭

ಸೈನಿಕರ ತ್ಯಾಗ

Image
ದೇಶಕ್ಕಾಗಿ ಪ್ರಾಣ ತೆತ್ತ ಸೈನಿಕರೇ ಓಹ್, ಇದೇನು ನಿಮ್ಮ ಈ ಬದುಕು. ತಾನೇ ಉರಿದು ಕರಗುವ ಮೊಂಬತ್ತಿಯ ಹಾಗೆ, ಜಗಕೆಲ್ಲಾ ಕೊಡುತ್ತಾ ಬೆಳಕು.. ಹೆತ್ತ ತಾಯಿಯ ಋಣಕ್ಕಿಂತ ಇಲ್ಲ ಮಿಗಿಲು ಎಂದರು, ದೊಡ್ಡವರು. ಏಕೋ ಅನಿಸುತಿದೆ ಇಂದು ನಿಮ್ಮ ತ್ಯಾಗ ಅದಕ್ಕಿಂತ ಹೆಚ್ಚೆಂದು, ನೀವು.. ತಾಯ್ನಾಡಿಗಾಗಿ ಮಡಿವವರು!! --------- ಜೂನ್ ೨೦೧೭

ಸರ್ಪ-ದರ್ಪ

Image
ಇರಲಿ ತೋರಿಸೋಣ ಅಂತ ಸ್ವಲ್ಪ ದರ್ಪ.. ಹಾಕಿಸಿದೆ ಗಾಡಿಯ ಹಿಂಭಾಗ ಸರ್ಪ.. ಇರಲಿಲ್ಲ ಯಾವುದೇ ಉದ್ದೇಶ ಕೊಡಬೇಕು ಅಂತ ಸಂದೇಶ ಆದ್ರೂ ಗೊತ್ತಿಲ್ದೆ, ಹೇಳ್ತಾ ಇದೆ.. ಹಾವು ಕಕ್ಕೋದು, ಗಾಡಿ ಉಗಿಯೋದು ಎರಡೂ ವಿಷ, ವಿಷ!!!  --------------- ಜೂನ್ ೨೦೧೭

ಮತ್ತೆ ಜಿನುಗುತಿದೆ ಕವನ

Image
ನಾನು ಇತ್ತೀಚಿಗೆ ಒಂದು ವಾಟ್ಸ್ಯಾಪ್ ಸಾಹಿತ್ಯಾಸಕ್ತರ ಬಳಗಕ್ಕೆ ಸೇರಿದೆ. ಆ ಬಳಗ ತುಂಬಾ ಪ್ರತಿಬಾವಂತರಿಂದ ಕೂಡಿದ್ದು ನನ್ನ ಕವನ ಬರೆಯೊ ಆಸ್ತೆಗೆ ಮತ್ತೆ ಜೀವ ಕೊಟ್ಟಿದೆ. ಆ ಗುಂಪಿನಲ್ಲಿ ವಾರಕ್ಕೊಂದು ಚಿತ್ರದ ಮೇಲೆ ಕವನ ಬರೆಯೋ ಸ್ಪರ್ದೆ ನಡೆಸುತ್ತಾರೆ. ಅದರ ಫಲವಾಗಿ ನಾ ಕವನಗಳನ್ನು ಬರೆಯೋಕೆ ಶುರು ಮಾಡಿದೆ. ಅದನ್ನು ಇಲ್ಲಿ ಹಂಚಿಕೊಳ್ಳೊವುದರ ಮುಖಾಂತರ ಈ ಬ್ಲಾಗಿಗೆ ಮತ್ತೆ ಜೀವ ಬಂದಿದೆ. ದಯವಿಟ್ಟು ಓದಿ ಪ್ರತಿಕ್ರಿಯಿಸಿ. ಹರೆಯದ ಹುಡುಗರು ಎಲ್ಲಾ ನಾಚಿ ನಿಂತರೂ ನೋಡಿ, ನರೆಯ ನೆರಿಗೆಗಳ್ಳೆಲ್ಲಾ ನಿಮಗಾವ ಲೆಕ್ಕ ಬಿಡಿ. ಬದುಕಿನೆಡೆಗೆ ಇರುವ, ನಿಮ್ಮ ಈ ಒಲುಮೆ ಹಿಮತಟದ ನದಿಯಂತೆ ಎಂದೂ ಬತ್ತದ ಚಿಲುಮೆ!! ದಿನವೂ ಹೊಸತನ.. ಇದ್ರೆ ಎಂದೂ..ಜೀವನ ಅರಿತೆವು ನಾವಿಂದು, ಮನಸಿಗೆಂದಿಗೂ ಬಾರದು ಮುದಿತನ!! --------------- ಜೂನ್ ೨೦೧೭